ನಿಮ್ಮ ಆತ್ಮಸಾಕ್ಷಾತ್ಕಾರವನ್ನು ಅನುಭವಿಸಿ
ನಿಮಗೆ ಬೇಕಾಗಿರುವುದು ಕೇವಲ ಒಂದು ಶುದ್ಧ ಇಚ್ಛೆ
ಶ್ರೀ ಮಾತಾಜಿಯವರು ಮಾನವ ಇತಿಹಾಸದಲ್ಲೇ ಏಕೈಕ ಆಧ್ಯಾತ್ಮಿಕ ಗುರುವಾಗಿದ್ದು, ತಮ್ಮ ಸಾವಿರಾರು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ವಿಶ್ವದಾದ್ಯಂತ ಸಾಮೂಹಿಕ ಆತ್ಮಸಾಕ್ಷಾತ್ಕಾರದ ಅನುಭವವನ್ನು ನೀಡಿದ್ದಾರೆ. ಲಕ್ಷಾಂತರ ಜನರು ಈ ವಿಶಿಷ್ಟ ಅನುಭವದಿಂದ ಪ್ರಯೋಜನ ಪಡೆದಿದ್ದಾರೆ ಮತ್ತು ಅದು ಅವರ ಜೀವನದಲ್ಲಿ ಒಂದು ಮಹತ್ವದ ತಿರುವಿನ ಕ್ಷಣವಾಗಿದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಾಧಕರು ತಮ್ಮ ಆತ್ಮಸಾಕ್ಷಾತ್ಕಾರವನ್ನು ಸಂಪೂರ್ಣ ಆಂತರಿಕ ಮೌನವಾಗಿ, ದೈಹಿಕವಾಗಿ ವಿಶ್ರಾಂತಿಯ ಸ್ಥಿತಿಯಾನ್ನು ಹಾಗೂ ಅನೇಕ ಬಾರಿ ಕೈಗಳ ಅಂಗೈಗಳಲ್ಲಿ ಅಥವಾ ಕೆಲವೊಮ್ಮೆ ಇಡೀ ದೇಹದ ಮೇಲೆ ಬೀಸುವ ಬೆಚ್ಚಗಿನ ಅಥವಾ ತಂಪಾದ ಗಾಳಿಯ ಅನುಭವವನ್ನು ಅನುಭವಿಸುತ್ತಾರೆ.
ಕೆಳಗಿನ ಹಂತಗಳು ಆತ್ಮಸಾಕ್ಷಾತ್ಕಾರದ ಅನುಭವಕ್ಕೆ ನಿಮ್ಮನ್ನು ಸಿದ್ಧಗೊಳಿಸಲು ಸಹಾಯ ಮಾಡುತ್ತವೆ. ನಿಮ್ಮ ಬೆನ್ನನ್ನು ನೇರವಾಗಿ ಇಟ್ಟುಕೊಂಡು ಆರಾಮವಾಗಿ ಕುಳಿತುಕೊಳ್ಳಿ. ನಿಮ್ಮ ಪಾದರಕ್ಷೆಗಳನ್ನು ತೆಗೆದು ಕುಳಿತುಕೊಳ್ಳಿ ಇದರಿಂದ ಸಹ ಸಹಾಯಕವಾಗಬಹುದು, ಏಕೆಂದರೆ ಭೂಮಾತೆಯು ನಮ್ಮ ಪಾದಗಳ ಮೂಲಕ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುತ್ತಾಳೆ.
ನೀವು ಸಂಪೂರ್ಣ ಆಂತರಿಕ ಮೌನವನ್ನು ಅನುಭವಿಸಿದರೆ ಮತ್ತು ಬಹುಶಃ ನಿಮ್ಮ ಅಂಗೈಗಳ ಮೂಲಕ ಅಥವಾ ತಲೆಯ ಮೇಲಿರುವ ಬ್ರಹ್ಮರಂಧ್ರ ಪ್ರದೇಶದಲ್ಲಿ ಮೃದುವಾದ ತಂಪಾದ ಗಾಳಿಯ ಅನುಭವವನ್ನು ಪಡೆದರೆ, ನೀವು ಆತ್ಮಸಾಕ್ಷಾತ್ಕಾರ ಹೊಂದಿದ ಆತ್ಮ ಎಂದು ತಿಳಿದುಕೊಳ್ಳಿ ಮತ್ತು ನಿಮ್ಮ ಆತ್ಮಸಾಕ್ಷಾತ್ಕಾರವನ್ನು ಸ್ವಾಭಾವಿಕವಾಗಿ ಸಕ್ರಿಯಗೊಳಿಸಿದ್ದೀರಿ. ಇದು ಅತ್ಯುತ್ತಮ ಆರಂಭವಾಗಿದ್ದು, ಮುಂದಿನ ಹಂತಗಳು ನಿಮ್ಮ ಧ್ಯಾನದ ಅನುಭವವನ್ನು ಇನ್ನಷ್ಟು ಆಳವಾಗಿಸಲು ಸಹಾಯ ಮಾಡುತ್ತವೆ.
ಕೆಲವು ಅಪರೂಪದ ಸಂದರ್ಭಗಳಲ್ಲಿ ಕೆಲವರು ಶ್ರೀ ಮಾತಾಜಿಯವರ ಸಮ್ಮುಖದಲ್ಲಿ ಅಥವಾ ಅವರ ಛಾಯಾಚಿತ್ರದ ಮುಂದೆ ಸಂಪೂರ್ಣ ಆತ್ಮಸಾಕ್ಷಾತ್ಕಾರವನ್ನು ಅನುಭವಿಸಿದ್ದರೂ, ಶ್ರೀ ಮಾತಾಜಿಯವರು ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಬಾರಿ ಪ್ರದರ್ಶಿಸಿರುವ ಆತ್ಮಸಾಕ್ಷಾತ್ಕಾರಕ್ಕಾಗಿ ಮಾರ್ಗದರ್ಶಿತ ಧ್ಯಾನವನ್ನು ಬಳಸುವುದು ಬಹಳ ಉಪಯುಕ್ತವಾಗಿದೆ.
ಜೊತೆಯಲ್ಲಿರುವ ವೀಡಿಯೊದಲ್ಲಿ ಶ್ರೀ ಮಾತಾಜಿಯವರೊಂದಿಗೆ ಮಾರ್ಗದರ್ಶಿತ ಧ್ಯಾನವನ್ನು ಅನುಸರಿಸಲು, ಮೊದಲು ಹಂತಗಳನ್ನು ಪರಿಚಯಿಸಿಕೊಳ್ಳುವುದು ಸಹಾಯಕವಾಗುತ್ತದೆ, ಏಕೆಂದರೆ ನೀವು ಸಂಪೂರ್ಣ ಅಭ್ಯಾಸವನ್ನು ಕಣ್ಣು ಮುಚ್ಚಿಕೊಂಡೇ ಮಾಡಲಿದ್ದೀರಿ. ಕಣ್ಣುಗಳನ್ನು ಮುಚ್ಚುವುದು ನಮ್ಮ ಆತ್ಮಸಾಕ್ಷಾತ್ಕಾರ ಮತ್ತು ಅದರ ನಂತರ ತಕ್ಷಣವೇ ಬರುವ ಧ್ಯಾನಸ್ಥಿತಿಯನ್ನು ಇನ್ನಷ್ಟು ಆಳವಾಗಿ ಅನುಭವಿಸಲು ಸಹಾಯ ಮಾಡುತ್ತದೆ. ಕೆಳಗಿನ ಚಿತ್ರಗಳು ಮತ್ತು ಪಠ್ಯದ ಕ್ರಮವನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ. ಆತ್ಮಸಾಕ್ಷಾತ್ಕಾರದ ಅಭ್ಯಾಸದಲ್ಲಿ ಶ್ರೀ ಮಾತಾಜಿಯವರು ನಿಮಗೆ ಮಾರ್ಗದರ್ಶನ ನೀಡುವಂತೆ ನಿಮ್ಮ ದೇಹದ ಮೇಲೆ ಕೈಯನ್ನು ಸರಿಯಾದ ಸ್ಥಾನದಲ್ಲಿ ಹೇಗೆ ಇಡಬೇಕೆಂಬುದನ್ನು ಹಾಗೂ ಪ್ರತಿಯೊಂದು ಸ್ಥಾನಕ್ಕೆ ಸಂಬಂಧಿಸಿದ ದೃಢೀಕರಣಗಳನ್ನು ತಿಳಿದುಕೊಳ್ಳಬಹುದು.
ಸಂಪೂರ್ಣ ಆತ್ಮಸಾಕ್ಷಾತ್ಕಾರದ ಅವಧಿಯಲ್ಲಿ, ನಾವು ಬಲಗೈಯನ್ನು ಎಡಭಾಗದಲ್ಲಿರುವ ಚಕ್ರಗಳ ಮೇಲೆ ಇಡುತ್ತೇವೆ ಮತ್ತು ಎಡಗೈಯ ಅಂಗೈಯನ್ನು ಕೆಳಗಿನ ಚಿತ್ರಗಳಲ್ಲಿ ತೋರಿಸಿರುವಂತೆ ತೆರೆದಿಟ್ಟಿರುತ್ತೇವೆ.
ಈಗ, ಮಾರ್ಗದರ್ಶಿತ ಧ್ಯಾನದ ಕೊನೆಯಲ್ಲಿ, ನೀವು ವಿಶ್ರಾಂತಿಯನ್ನು ಅನುಭವಿಸುತ್ತಿದ್ದೀರಾ ಮತ್ತು ನಿಮ್ಮ ಆಲೋಚನೆಗಳು ಶಾಂತವಾಗಿವೆಯೇ ಅಥವಾ ಕ್ರಮೇಣ ಮಾಯವಾಗಿವೆಯೇ ಎಂಬುದನ್ನು ಗಮನಿಸಿ. ಇದು ಧ್ಯಾನದ ಮೊದಲ ಸ್ಥಿತಿ – ನಿರ್ವಿಚಾರ ಜಾಗೃತಿ. ಇದು ನಿಮ್ಮ ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಶುದ್ಧ ಮತ್ತು ಶಾಂತಿಯುತ ಜಾಗೃತಿಯ ಸ್ಥಿತಿಯಾಗಿದೆ.
ಈಗ ನಿಮ್ಮ ಅಂಗೈಗಳಲ್ಲಿ ಮತ್ತು ತಲೆಯ ಮೇಲಿನ ಬ್ರಹ್ಮರಂಧ್ರದ ಪ್ರದೇಶದ ಮೇಲೆ ಮೃದುವಾದ ತಂಪಾದ ಗಾಳಿಯ ಅನುಭವವಾಗುತ್ತಿದೆಯೇ ಎಂದು ನೋಡಿ. ಆರಂಭದಲ್ಲಿ ಅದು ಬೆಚ್ಚಗಿರಬಹುದು; ಇದು ನಿಮ್ಮ ಕುಂಡಲಿನಿ(opens in new tab) ಶಕ್ತಿಯು ನಿಮ್ಮ ಸೂಕ್ಷ್ಮ ವ್ಯವಸ್ಥೆಯನ್ನು ಶುದ್ಧೀಕರಿಸುತ್ತಿದೆ ಎಂಬ ಸಂಕೇತವಾಗಿದೆ. ಆದರೆ ಅದು ಕ್ರಮೇಣ ತಂಪಾಗುತ್ತದೆ. ಇದನ್ನು ಪರಿಶೀಲಿಸಲು ನಿಮ್ಮ ಎಡಗೈಯ ಅಂಗೈಯನ್ನು ತಲೆಯ ಮೇಲೆ ಸ್ವಲ್ಪ ಎತ್ತರದಲ್ಲಿ ಹಿಡಿದು ನೋಡಿ, ನಂತರ ಬಲಗೈಯಿಂದಲೂ ಪ್ರಯತ್ನಿಸಿ.
ನೀವು ಅದನ್ನು ಅನುಭವಿಸಲು ಸಾಧ್ಯವಾಗದಿದ್ದರೆ, ಅದಕ್ಕೆ ಹಲವು ಕಾರಣಗಳಿರಬಹುದು. ಅವುಗಳಲ್ಲಿ ಅತ್ಯಂತ ಸಾಮಾನ್ಯವಾದುದು ನಾವು ಕ್ಷಮಿಸಲು ಸಾಧ್ಯವಾಗದಿರುವುದು. ನೀವು ಹೃದಯದಿಂದ ಕೆಲವು ಬಾರಿ ಹೀಗೆ ಹೇಳಿದರೆ ಸಹಾಯವಾಗಬಹುದು:“ಅಮ್ಮಾ (ಅಥವಾ ನೀವು ಬಯಸಿದರೆ ಶ್ರೀ ಮಾತಾಜಿ), ನಾನು ಎಲ್ಲರನ್ನೂ ಕ್ಷಮಿಸುತ್ತೇನೆ.”ನಂತರ ಮತ್ತೆ ನಿಮ್ಮ ತಲೆಯ ಮೇಲೆ ತಂಪಾದ ಗಾಳಿಯ ಅನುಭವವಾಗುತ್ತಿದೆಯೇ ಎಂದು ಪರಿಶೀಲಿಸಿ.
ಇದು ನಿಮ್ಮ ಆಂತರಿಕ ಪ್ರಯಾಣದ ಆರಂಭವಾಗಿದೆ — ಶಾಶ್ವತ ಆಧ್ಯಾತ್ಮಿಕ ಅಸ್ತಿತ್ವದ ಹೊಸ ಲೋಕದತ್ತ ಸಾಗುವ ಒಂದು ಹೊಸ ಪಯಣ. ಈಗ ನೀವು ಅದನ್ನು ಸಂಪೂರ್ಣ ಶಾಂತಿ ಮತ್ತು ಸಾಮರಸ್ಯದಲ್ಲಿ ಅನ್ವೇಷಿಸಬಹುದು. ನಿಯಮಿತ ಧ್ಯಾನದ ಮೂಲಕ ಈ ಹೊಸ ಜಾಗೃತಿಯನ್ನು ಕಾಪಾಡಿಕೊಂಡರೆ, ನಿಮ್ಮ ಸ್ವಂತ ಸೂಕ್ಷ್ಮ ವ್ಯವಸ್ಥೆಯ ಸ್ಥಿತಿಯನ್ನೂ ಹಾಗೂ ಇತರರ ಸ್ಥಿತಿಯನ್ನೂ ನಿಮ್ಮ ಬೆರಳ ತುದಿಗಳಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ. ಜೊತೆಗೆ ನಿಮ್ಮೊಳಗಿನ ಸಹಜ ಆಧ್ಯಾತ್ಮಿಕ ಶಕ್ತಿ (ಕುಂಡಲಿನಿ)ಯ ಮೂಲಕ ಅವುಗಳನ್ನು ಸರಿಪಡಿಸಲು ಸಹ ಸಾಧ್ಯವಾಗುತ್ತದೆ.
ಮುಂದಿನ ವಿಭಾಗಗಳು ಸಹಜ ಯೋಗ ಧ್ಯಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಮನೆಯಲ್ಲಿ ಸರಳವಾದ, ಪ್ರಯತ್ನರಹಿತ ಧ್ಯಾನವನ್ನು ಹೇಗೆ ಅಭ್ಯಾಸ ಮಾಡಬಹುದು ಎಂಬುದನ್ನು ಕಲಿಯಲು ನಿಮಗೆ ಸಹಾಯ ಮಾಡುತ್ತವೆ. ಸಾಮೂಹಿಕ ಧ್ಯಾನ(opens in new tab) (Collective Meditation) ಕುರಿತ ವಿಭಾಗವು ಶ್ರೀ ಮಾತಾಜಿಯವರು ಸಲಹೆ ನೀಡಿದ ಸಾಮೂಹಿಕ ಧ್ಯಾನದ ಮಹತ್ವವನ್ನು ಪರಿಚಯಿಸುತ್ತದೆ ಮತ್ತು ವಿಶ್ವದಾದ್ಯಂತ ಇರುವ ಸಹಜ ಯೋಗ ಧ್ಯಾನ(opens in new tab) ಕೇಂದ್ರಗಳನ್ನು ತಿಳಿದುಕೊಳ್ಳಲು ಸಹ ಸಹಾಯ ಮಾಡುತ್ತದೆ.