ಕುಟುಂಬ

ಸರ್ ಸಿ.ಪಿ. ಶ್ರೀವಾಸ್ತವ

ಸರ್ ಸಿಪಿ ಮತ್ತು 'ಅಲ್ಪ ಪ್ರಮಾಣದ ಕೊಲೋಸಸ್'

ಶ್ರೀ ಮಾತಾಜಿ ನಿರ್ಮಲಾ ದೇವಿ ಅವರು ಸಹಜ ಯೋಗದ ಹಿಂದಿನ ಪ್ರೇರಕ ಶಕ್ತಿ ಎಂದು ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ಆಧ್ಯಾತ್ಮಿಕ ನಾಯಕಿಯಾಗಿ ಅವರ ಖ್ಯಾತಿಯ ಜೊತೆಗೆ ಒಂದು ಸಮಾನಾಂತರ ಕಥೆಯೂ ಇದೆ: ಅವರ ಪತಿ ಸರ್ ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ ಅವರ ಅಸಾಧಾರಣ ವೃತ್ತಿಜೀವನ.

ಆ ಕಾಲದಲ್ಲಿ, ವಿಶೇಷವಾಗಿ ಬಾಲ ವಿಧವೆಯರೊಂದಿಗೆ ನಡೆದುಕೊಳ್ಳಲಾಗುತ್ತಿದ್ದ ಕ್ರೂರ ವರ್ತನೆಯನ್ನು ಕಂಡ ಶ್ರೀ ಮಾತಾಜಿಯ ಪೂರ್ವಜರು, ಸಂಪ್ರದಾಯ ಮತ್ತು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ನಂಬಿಕೆಗಳಿಗೆ ವಿರುದ್ಧವಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು.

ಅವರ ಸಹೋದರ ಎಚ್.ಪಿ. ಸಾಲ್ವೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ, ಸ್ವತಃ ಅಕಾಲಿಕ ವಿಧವೆಯಾಗಿದ್ದ ತಮ್ಮ ಅಜ್ಜಿಯನ್ನು ಹೀಗೆ ವರ್ಣಿಸಿದ್ದಾರೆ:
“ಅವರು ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಅಪಾರ ಧೈರ್ಯ ಮತ್ತು ದೃಢ ನಂಬಿಕೆಯುಳ್ಳ, ಅತ್ಯುನ್ನತ ವ್ಯಕ್ತಿತ್ವದ ಮಹಿಳೆಯಾಗಿದ್ದರು. ಒಂದು ಕಡೆ ಅಪಾರ ಶೌರ್ಯ ಮತ್ತು ಧೈರ್ಯವನ್ನು ಹೊಂದಿದ್ದರೆ, ಮತ್ತೊಂದು ಕಡೆ ತಮ್ಮ ಮಕ್ಕಳ ಬಗ್ಗೆ ತಾಯಿಯ ಪ್ರೀತಿ ಮತ್ತು ಕರುಣೆಯನ್ನು ಹೊಂದಿದ್ದರು. ನಾನು ಇದನ್ನು ವಿಶೇಷವಾಗಿ ಒತ್ತಿಹೇಳುತ್ತಿರುವುದು ಏಕೆಂದರೆ ಈ ಎಲ್ಲಾ ಗುಣಗಳು ಅವರ ಮಕ್ಕಳಲ್ಲಿಯೂ ಮತ್ತು ಮೊಮ್ಮಕ್ಕಳಲ್ಲಿಯೂ, ವಿಶೇಷವಾಗಿ ಶ್ರೀ ಮಾತಾಜಿಯವರಲ್ಲಿ, ಸಂಪೂರ್ಣವಾಗಿ ವ್ಯಕ್ತವಾಗಿದ್ದವು.”

ಶ್ರೀ ಮಾತಾಜಿಯವರ ತಂದೆ-ತಾಯಿಯವರು ಸಹ ನ್ಯಾಯ ಮತ್ತು ಸಮಾನತೆಗೆ ಸಮರ್ಪಿತ ಜೀವನವನ್ನು ನಡೆಸಿದರು. ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರೊಂದಿಗೆ ಸೇರಿಕೊಂಡರು. ಕುಟುಂಬದ ಯಾವುದೇ ಸದಸ್ಯರನ್ನು ಬಂಧಿಸಿ ಜೈಲಿಗೆ ಕಳುಹಿಸಿದಾಗ ಯಾರೂ ಕಣ್ಣೀರು ಸುರಿಸಬಾರದು ಎಂಬುದು ಕುಟುಂಬದ ನಿಯಮವಾಗಿತ್ತು.ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರ, ಅವರ ತಂದೆ ಹಾಗೂ ಅವರ ಅನೇಕ ಸಹೋದರ-ಸಹೋದರಿಯರು ಹೊಸದಾಗಿ ರೂಪುಗೊಂಡ ಭಾರತೀಯ ಸರ್ಕಾರದಲ್ಲಿ ಸೇವೆ ಸಲ್ಲಿಸಿದರು

ಶ್ರೀ ಮಾತಾಜಿಯವರ ಪತಿ ಸರ್ ಸಿ.ಪಿ. ಶ್ರೀವಾಸ್ತವ ಅವರೂ ಸಹ ಸಾರ್ವಜನಿಕ ಸೇವೆಯ ಅತ್ಯುನ್ನತ ಆದರ್ಶಗಳಿಗೆ ಸಮರ್ಪಿತವಾದ ಮಾದರಿ ಜೀವನವನ್ನು ನಡೆಸಿದರು. ಅವರು ರಚಿಸಿದ ಪುಸ್ತಕಗಳಲ್ಲಿ “ಲಾಲ್ ಬಹದ್ದೂರ್ ಶಾಸ್ತ್ರಿ: ರಾಜಕೀಯದಲ್ಲಿನ ಸತ್ಯದ ಜೀವನ”[1] ಮತ್ತು “ಭ್ರಷ್ಟಾಚಾರ: ಭಾರತದ ಆಂತರಿಕ ಶತ್ರು”[2] ಪ್ರಮುಖವಾಗಿವೆ.

(opens in new tab)

2011 ರಲ್ಲಿ ದೇಹತ್ಯಾಗ ಮಾಡಿದ ಶ್ರೀ ಮಾತಾಜಿಯವರ ಕುಟುಂಬದಲ್ಲಿ ಇಬ್ಬರು ಪುತ್ರಿಯರು, ನಾಲ್ವರು ಮೊಮ್ಮಕ್ಕಳು ಹಾಗೂ ಅನೇಕ ಮರಿ ಮೊಮ್ಮಕ್ಕಳು ಇದ್ದಾರೆ.

“ಆ ದಿನಗಳಲ್ಲಿ ಉಪಭೋಗವಾದ ಗ್ರಾಹಕೀಕರಣ ಎಂಬುದು ಇರಲಿಲ್ಲ. ನಾವು ಸರಳ ಜೀವನವನ್ನು ನಡೆಸುತ್ತಿದ್ದೆವು. ಹಾಗೆಯೇ, ತಲೆಮಾರುಗಳ ನಡುವೆ ಇಂದಿನಷ್ಟರ ಮಟ್ಟಿಗೆ ಸಂಘರ್ಷಗಳೂ ಇರಲಿಲ್ಲ. ಕುಟುಂಬವು ಬಹಳ ಸೌಹಾರ್ದದಿಂದ ಮತ್ತು ಸಹಜವಾಗಿ ಸಾಗುತ್ತಿತ್ತು.”

ಶ್ರೀ ಮಾತಾಜಿಯವರ ಪುತ್ರಿ ಸಾಧನಾ ವರ್ಮಾ

Explore this section


ಉಲ್ಲೇಖಗಳು:
1. ^ ಶ್ರೀವಾಸ್ತವ, ಲಾಲ್ ಬಹದ್ದೂರ್ ಶಾಸ್ತ್ರಿ: ರಾಜಕೀಯದಲ್ಲಿನ ಸತ್ಯದ ಜೀವನ, ನವದೆಹಲಿ: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, 1995.

2. ^ ಶ್ರೀವಾಸ್ತವ, ಭ್ರಷ್ಟಾಚಾರ: ಭಾರತದ ಆಂತರಿಕ ಶತ್ರು, ನವದೆಹಲಿ: ಮ್ಯಾಕ್ಮಿಲನ್ ಇಂಡಿಯಾ, 2001.

SHARE PAGE