ಸೃಜನಶೀಲತೆ
ಆಂತರಿಕ ಸೌಂದರ್ಯದ ಅಭಿವ್ಯಕ್ತಿ
ತಮ್ಮ ಜೀವನ ಮತ್ತು ಕಾರ್ಯದ ಅವಧಿಯೆಲ್ಲಾ, ಶ್ರೀ ಮಾತಾಜಿಯವರು ಕಲೆಗಳ ಪ್ರೋತ್ಸಾಹಕ್ಕಾಗಿ ಅಪಾರ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಿದರು. ಜಗತ್ತಿನ ವಿವಿಧ ಸಂಸ್ಕೃತಿಗಳನ್ನು ವ್ಯಕ್ತಪಡಿಸಲು ಮತ್ತು ಪೋಷಿಸಲು ಕಲೆಗಳು ಪ್ರಮುಖ ಸಾಧನಗಳಲ್ಲೊಂದು ಎಂದು ಅವರು ಕಂಡಿದ್ದರು. ವಿಶೇಷವಾಗಿ, ತಮ್ಮ ತಾಯ್ನಾಡಾದ ಭಾರತದ ಶ್ರೀಮಂತ ಮತ್ತು ಪ್ರಾಚೀನ ಕಲಾ ಪರಂಪರೆಗಳನ್ನು ಸಂರಕ್ಷಿಸಲು ಅವರು ಬಯಸಿದರು ಹಾಗೂ ಅವುಗಳನ್ನು ವಿಶ್ವದಾದ್ಯಂತ ಪ್ರಸಾರಗೊಳಿಸಲು ಸಕ್ರಿಯವಾಗಿ ಉತ್ತೇಜಿಸಿದರು
2003ರಲ್ಲಿ ಶ್ರೀ ಮಾತಾಜಿಯವರು ತಮ್ಮ ಸಹೋದರರ (ಪ್ರೀತಿಯಿಂದ ಬಾಬಾಮಾಮ ಎಂದು ಕರೆಯಲ್ಪಡುವ) ಸಹಾಯದಿಂದ ಭಾರತದ ಮಹಾರಾಷ್ಟ್ರದಲ್ಲಿ ಕಲೆಗಳಿಗಾಗಿ ಒಂದು ಕೇಂದ್ರವನ್ನು ಸ್ಥಾಪಿಸಿದರು. ಈ ಶಾಂತ ಗ್ರಾಮೀಣ ವಾತಾವರಣದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ಚಿತ್ರಕಲೆಯನ್ನು ಕಲಿಯಲು ವಿದ್ಯಾರ್ಥಿಗಳು ವಿಶ್ವದ ವಿವಿಧ ಭಾಗಗಳಿಂದ ಬರುತ್ತಾರೆ. ಶ್ರೀ ಮಾತಾಜಿಯವರು ಪಿ.ಕೆ. ಸಾಲ್ವೆ ಆರ್ಟ್ಸ್ ಅಕಾಡೆಮಿಯ(opens in new tab) ವಾಸ್ತುಶಿಲ್ಪ ವಿನ್ಯಾಸಕ್ಕೆ ವೈಯಕ್ತಿಕವಾಗಿ ಮಾರ್ಗದರ್ಶನ ನೀಡಿದರು. ಅದೇ ರೀತಿ, ದೆಹಲಿಯಲ್ಲಿರುವ ನಿರ್ಗತಿಕ ಮಹಿಳೆಯರು ಮತ್ತು ಅನಾಥ ಮಕ್ಕಳಿಗಾಗಿ ನಿರ್ಮಿಸಲಾದ ವಿಶ್ವ ನಿರ್ಮಲ ಪ್ರೇಮ ಕೇಂದ್ರ(opens in new tab) ಸೇರಿದಂತೆ ಮಾನವೀಯ ಉದ್ದೇಶಗಳಿಗಾಗಿ ನಿರ್ಮಿಸಲಾದ ಇತರ ಕಟ್ಟಡಗಳ ವಿನ್ಯಾಸಕ್ಕೂ ಅವರು ಮಾರ್ಗದರ್ಶನ ನೀಡಿದರು.
ಕೈಯಿಂದ ತಯಾರಿಸಲಾದ ವಸ್ತುಗಳ ಮಹತ್ವವನ್ನು ಅವರು ಗುರುತಿಸಿದ್ದರು ಮತ್ತು ಮಹಾತ್ಮ ಗಾಂಧಿಯವರ ಪರಂಪರೆಯಂತೆ, ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನಕ್ಕೆ ಅತ್ಯವಶ್ಯಕವಾಗಿರುವ ಸಣ್ಣ ಕೈಗಾರಿಕೆಗಳನ್ನು ಅವರು ನಿರಂತರವಾಗಿ ಬೆಂಬಲಿಸಿದರು.
ವರ್ಷಗಳ ಅವಧಿಯಲ್ಲಿ, ಶ್ರೀ ಮಾತಾಜಿಯವರು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಅತ್ಯಂತ ಪ್ರಸಿದ್ಧ ಕಲಾವಿದರನ್ನು ಪೋಷಿಸಿದರು ಮತ್ತು ಸಂಗೀತ ಕಾರ್ಯಕ್ರಮಗಳು ಹಾಗೂ ಇತರ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಅವರನ್ನು ಆಹ್ವಾನಿಸಿದರು. ಅವರ ಸಮ್ಮುಖದಲ್ಲಿ ಪ್ರದರ್ಶನ ನೀಡಿದ ಅನೇಕರು ಅದನ್ನು ತಮ್ಮ ಕಲಾತ್ಮಕ ಬೆಳವಣಿಗೆಯಲ್ಲಿನ ಪರಿವರ್ತನಾತ್ಮಕ ಕ್ಷಣವೆಂದು ವಿವರಿಸಿದ್ದಾರೆ. ಅವರ ಪ್ರಬಲ ಸೃಜನಶೀಲ ಶಕ್ತಿಯು ತಮ್ಮದೇ ಸೃಜನಶೀಲತೆ ಮತ್ತು ಪ್ರದರ್ಶನ ಕೌಶಲ್ಯವನ್ನು ಹೆಚ್ಚಿಸಿತು ಎಂದು ಅವರು ಕಂಡುಕೊಂಡರು.
ಉಸ್ತಾದ್ ಅಮ್ಜದ್ ಅಲಿ ಖಾನ್, ದೇಬು ಚೌಧರಿ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ಶ್ರೀ ಮಾತಾಜಿಯವರ ಆಹ್ವಾನದ ಮೇರೆಗೆ ಪ್ರದರ್ಶನ ನೀಡಿದ ಖ್ಯಾತ ಕಲಾವಿದರಲ್ಲಿ ಕೆಲವರು ಮಾತ್ರ. ಶ್ರೀ ಮಾತಾಜಿಯವರು ಸ್ವತಃ ಪುಸ್ತಕಗಳು, ಭಜನೆಗಳು (ಭಾರತೀಯ ಭಕ್ತಿಗೀತೆಗಳು) ಮತ್ತು ಕವಿತೆಗಳನ್ನು ರಚಿಸುತ್ತಿದ್ದರು .
ಕಲೆಗಳ ಪೋಷಣೆಯಲ್ಲಿ ಶ್ರೀ ಮಾತಾಜಿಯವರ ಕೊಡುಗೆ ರಂಗಭೂಮಿಗೆ ನೀಡಿದ ಬಲವಾದ ಬೆಂಬಲವನ್ನೂ ಒಳಗೊಂಡಿತ್ತು. ಪ್ರತಿಭಾವಂತ ರಂಗಭೂಮಿ ಕಲಾವಿದರ ಒಂದು ತಂಡವನ್ನು ಅವರು "ಥಿಯೇಟರ್ ಆಫ್ ಇಟರ್ನಲ್ ವ್ಯಾಲ್ಯೂಸ್"(opens in new tab) (ಶಾಶ್ವತ ಮೌಲ್ಯಗಳ ರಂಗಭೂಮಿ) ಎಂಬ ಹೆಸರಿನಲ್ಲಿ ಒಟ್ಟಾಗಿ ಕೆಲಸ ಮಾಡಲು ಪ್ರೋತ್ಸಾಹಿಸಿದರು. 1993ರಲ್ಲಿ ಬೆಲ್ಜಿಯಂನ ಘೆಂಟ್ ನಗರದಲ್ಲಿ ಸ್ಥಾಪಿತವಾದ ಈ ತಂಡವು ಇಂದಿಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸ ಮಾಡಿ, ಆತ್ಮಜಾಗೃತಿ ಮತ್ತು ಆಧ್ಯಾತ್ಮಿಕತೆಯನ್ನು ಪ್ರೇಕ್ಷಕರಲ್ಲಿ ಪ್ರೇರೇಪಿಸುವ ನಾಟಕಕಾರರ ಕೃತಿಗಳನ್ನು ಪ್ರದರ್ಶಿಸಿತು
ಥಿಯೇಟರ್ ಆಫ್ ಇಟರ್ನಲ್ ವ್ಯಾಲ್ಯೂಸ್ ಶಾಲೆಗಳು, ವಿಶ್ವವಿದ್ಯಾಲಯಗಳು, ಕಂಪನಿಗಳು ಮತ್ತು ಸಮುದಾಯಗಳೊಂದಿಗೆ ಸಹ ಕಾರ್ಯನಿರ್ವಹಿಸುತ್ತದೆ. ಇವುಗಳು "ಕಲ್ಚರ್ ಆಫ್ ದ ಸ್ಪಿರಿಟ್ ಫೆಸ್ಟಿವಲ್(opens in new tab)" ಮತ್ತು "ಇಂಟರ್ನ್ಯಾಷನಲ್ ನಿರ್ಮಲ ಆರ್ಟ್ಸ್ ಅಕಾಡೆಮಿ"(opens in new tab) ಮುಂತಾದ ಶೈಕ್ಷಣಿಕ ಮತ್ತು ಕಲಾತ್ಮಕ ಯೋಜನೆಗಳಿಗೆ ಪ್ರಾಯೋಗಿಕ ಪರಿಣತಿಯನ್ನು ಒದಗಿಸುತ್ತವೆ. ಈ ಕಾರ್ಯಕ್ರಮಗಳು ಪ್ರತಿವರ್ಷ ಇಟಲಿಯ ಪಿಯೆಮೋಂಟೆ ಪ್ರದೇಶದಲ್ಲಿ ನಡೆಯುತ್ತವೆ.
ಭಾರತದ ಪ್ರಾಚೀನ ಯೋಗ ಪರಂಪರೆಯ ಪ್ರಕಾರ, ಮಾನವನಲ್ಲಿ ಏಳು ಪ್ರಮುಖ ಗುಣಗಳಿವೆ. ಅವುಗಳಲ್ಲಿ ಎರಡನೆಯದು ಸೃಜನಶೀಲತೆಯ ತತ್ವವಾಗಿದೆ. ಆತ್ಮಸಾಕ್ಷಾತ್ಕಾರ(opens in new tab) ಇಲ್ಲದೆ ಅಥವಾ ಆತ್ಮಜಾಗೃತಿಯ ಸಾಧ್ಯತೆ ಅತ್ಯಂತ ಸೀಮಿತವಾಗುತ್ತದೆ,. ಈ ಕಾರಣದಿಂದಲೇ, ಶ್ರೀ ಮಾತಾಜಿಯವರು ತಾವು ಭೇಟಿ ನೀಡಿದ ಎಲ್ಲಾ ದೇಶಗಳ ವ್ಯಕ್ತಿಗಳು ಮತ್ತು ಸಮುದಾಯಗಳಲ್ಲಿ ಸೃಜನಶೀಲ ಶಕ್ತಿಗಳನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು.